ಮಾಸಲು ಸೀರೆ

ವಿರಕ್ತ ಲೋಕದ ಅಸಂಬದ್ಧ ಉಲಿತ
ಉಳಿಯಿಂದ ತೂತು ಕೊರೆದಂತೆ
ಖಾಲಿಯಾದ ನೇತ್ರದ್ವಯಗಳು
ಪರಾಂಬರಿಸಿ ದೃಷ್ಟಿಯಿಟ್ಟರಷ್ಟೇ ದೃಶ್ಯ.

ಸೀಳುನೋಟ ಬೀರುತ್ತಿದ್ದಾಳೆ ಆಕೆ
ಬಾಗಿದ ಬೆನ್ನು ಸಹಕರಿಸುತ್ತಿಲ್ಲ,
ಒಮ್ಮೆಲೆ ತಡಕಾಡುತ್ತಾಳೆ,
ಜಾರಿದ ಚಾಳೀಸು ಜಾಗಕ್ಕೇರಿಸಲು:

ನಿರ್ಜೀವ ಬಿಳಿಕೂದಲುಗಳು
ಎತ್ತಿ ಕಟ್ಟಲಾಗದು
ನೆರಿಗೆಗಟ್ಟಿದ ಹಸ್ತದ ಬೆರಳುಗಳಿಗೆ:

ಮೈಗಂಟಿದ ಮಾಸಲು ಸೀರೆ
ಕೂಡ ಈಗೀಗ ಆಕೆಗೆ ಭಾರ
ಸಿಡುಕುತ್ತಾಳೆ- ಹೊರೆಗೆ
ಡೊಂಕು ಕಾಲುಗಳ ಜೋಡಿಸಲು
ಜರೂರು ಇಲ್ಲದಾಗಲು ಮತ್ತೆ
ಮಡಚುತ್ತಾಳೆ-ಮುಲುಗುತ್ತ,

ದಿಗಂತದಲ್ಲಿ ಅಸ್ತಂಗತನಾಗುತ್ತ ಭಾನು
ಭಾರವಾಗಿ ಕೊನೆಯ ಬಾಣಬಿಟ್ಟಂತೆ
ಹೊರಟು ನಿಂತಿದ್ದಾನೆ-
ಏಕಾಂಗಿತನದ ಉಯಿಲನ್ನು ಆಕೆಯ ಹೆಸರಿಗಿಟ್ಟು

ಧಗಧಗನೆ ಉರಿದು
ಬೆಳಕು ಚೆಲ್ಲಿದ ಕಾಲ
ಈಗ ಬರಿಯ ಮೆಲಕು ಮಾತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ಸೂರ್ಯ
Next post ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys